November 2020

ಕ್ಷೇತ್ರಕ್ಕೆ ವಿಶ್ವಖ್ಯಾತಿ ದೊರಕಿಸಿದ ಆದರ್ಶ ರಾಜಕಾರಣಿ ಜನಾರ್ದನ ಪೂಜಾರಿ

ರಾಜಕೀಯ ಕ್ಷೇತ್ರದಲ್ಲಿ ಇಂದು ಅಧಿಕಾರ  ಇದ್ದಾಗ ಮಾತ್ರ  ರಾಜಕಾರಣಿಗಳು ಜನಪ್ರಿಯತೆ ಗೌರವ ಪಡೆಯುತ್ತಾರೆ. ಎಷ್ಟೇ ದೊಡ್ಡ ರಾಜಕಾರಣಿಯಾದರೂ ಅವರಲ್ಲಿ ಯಾವುದೇ ಅಧಿಕಾರ ಇಲ್ಲದಿದ್ದರೆ ಅವರನ್ನು ಯಾರೂ ಕೂಡ ನೆನಪಿಸುವುದಿಲ್ಲ, ಗೌರವಿಸುವುದಿಲ್ಲ. ಆದರೆ ರಾಜಕೀಯದಲ್ಲಿ ಇಂದು ತಾನು ಯಾವುದೇ ಅಧಿಕಾರ ಹೊಂದಿಲ್ಲದಿದ್ದರೂ, ತನ್ನ ಘನತೆ, ಆದರ್ಶ ವ್ಯಕ್ತಿತ್ವದಿಂದ ಇಂದಿಗೂ ಜನಸಮುದಾಯದಿಂದ ಗೌರವಿಸಲ್ಪಡುತ್ತಿರುವ ಓರ್ವ ಅಪೂರ್ವ ಮಾದರಿ ರಾಜಕಾರಣಿಯಾಗಿ ಜನಮಾನಸದಲ್ಲಿ ನೆಲೆ ನಿಂತವರು ಜನಾರ್ದನ ಪೂಜಾರಿಯವರು. ತನ್ನ ನೇರ ನಡೆನುಡಿ, ಶುದ್ಧ ಚಾರಿತ್ರ್ಯ, ಸತ್ಯ ಪ್ರಾಮಾಣಿಕತೆಯಿಂದ ರಾಜಕೀಯಕ್ಕೆ ಹೊಸ ಭಾಷ್ಯ […]

ಕ್ಷೇತ್ರಕ್ಕೆ ವಿಶ್ವಖ್ಯಾತಿ ದೊರಕಿಸಿದ ಆದರ್ಶ ರಾಜಕಾರಣಿ ಜನಾರ್ದನ ಪೂಜಾರಿ Read More »

ಗುರುಗಳ ಕಾರುಣ್ಯದಿಂದ ಉಪ್ಪು ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ದೊರೆಯಿತು

ಪೂಜ್ಯ ಗುರುವರ್ಯರು ಎರಡನೆಯ ಸಲ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿತ್ತು. ಅದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕುಡಿಯಲು ಶುದ್ಧವಾದ ಸಿಹಿನೀರು ದೊರೆಯುವುದಿಲ್ಲ ಎಂಬುದನ್ನು ಭಕ್ತರು ಶ್ರೀ ಗುರುಗಳ ಗಮನಕ್ಕೆ ತಂದರು. ಆಗ ಪೂಜ್ಯ ಗುರುಗಳು ಶ್ರೀ ಕ್ಷೇತ್ರದ ಆಗ್ನೇಯ ಭಾಗದಲ್ಲಿ ಒಂದು ಸ್ಥಳ ತೋರಿಸಿ ಅಲ್ಲಿ ಬಾವಿ ತೋಡಲು ಹೇಳುತ್ತಾರೆ. ಏನಾಶ್ಚರ್ಯ! ಪರಿಸರದಲ್ಲೆಲ್ಲಾ ಉಪ್ಪು ನೀರೆ ದೊರೆಯುತ್ತಿದ್ದರೂ, ಗುರುಗಳು ತೋರಿಸಿದ ಸ್ಥಳದಲ್ಲಿ ಕೆಲವೇ ಅಡಿ ಆಳದಲ್ಲಿ ಸಿಹಿನೀರಿನ ಸೆಲೆ ಸಿಕ್ಕಿದ್ದನ್ನು

ಗುರುಗಳ ಕಾರುಣ್ಯದಿಂದ ಉಪ್ಪು ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ದೊರೆಯಿತು Read More »

2019ರಲ್ಲಿ ನೂತನಧ್ವಜಸ್ತಂಭ ಪ್ರತಿಷ್ಠಾಪನೆ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 2019 ರ ಫೆಬ್ರವರಿಯಲ್ಲಿ ಜನಾರ್ದನ ಪೂಜಾರಿಯವರ ಸಂಕಲ್ಪ ಶಕ್ತಿಯಿಂದ ಶ್ರೀಕ್ಷೇತ್ರದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ, ಸ್ವರ್ಣಶಿಖರ ಪ್ರತಿಷ್ಠೆಯಾಗಿ ಶ್ರಧ್ಧಾಭಕ್ತಿಯಿಂದ ಬ್ರಹ್ಮಕಲಶ ನಡೆದು ಶ್ರೀಕ್ಷೇತ್ರ ಮತ್ತಷ್ಟು ಮೆರುಗು ಪಡೆಯಿತು. ಇಂತಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಂದ ಇಂದು ಶ್ರೀ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಇಂತಹ ಅಪೂರ್ವ ಸಾಧನೆ ಪೂಜಾರಿಯವರಂತಹ ಸಾಧಕರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಆಡಳಿತ ಸಮಿತಿ ಹಾಗೂ ಕ್ಷೇತ್ರದ ಭಕ್ತರ ಸೇವಾ ಮನೋಭಾವನೆಯಿಂದ

2019ರಲ್ಲಿ ನೂತನಧ್ವಜಸ್ತಂಭ ಪ್ರತಿಷ್ಠಾಪನೆ Read More »

ಪೂಜ್ಯ ಗುರುಗಳಿಂದ ಶಿವಲಿಂಗ ಪ್ರತಿಷ್ಠಾಪನೆ

ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳು ಶ್ರೀ ಕ್ಷೇತ್ರದ ಪ್ರತಿಷ್ಠಾಪನೆಗಾಗಿ ಮೂರನೆಯ ಸಲ ಮಂಗಳೂರಿಗೆ ಪಾದಾರ್ಪಣೆ ಮಾಡಿದರು. 21.2.1912ರ ಶಿವರಾತ್ರಿಯ ಪುಣ್ಯದಿನ ಬಿಲ್ಲವರು ಸೇರಿದಂತೆ ಸಮಸ್ತ ಅಸ್ಪೃಶ್ಯ ಸಮುದಾಯದ ಭಾಗ್ಯದ ಬಾಗಿಲು ತೆರೆದ ಪರ್ವಕಾಲ… ಅದೇ ದಿನ ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಅತ್ಯಂತ ಕಾರಣಿಕ ಶಕ್ತಿಯ ಶಿವಲಿಂಗವನ್ನು ಪೂಜ್ಯ ಗುರುಗಳು ತನ್ನ ದಿವ್ಯಕರಗಳಿಂದಲೇ ಪ್ರತಿಷ್ಠಾಪನೆ ಮಾಡಿದರು. ಆ ದಿನ ಈ ಸಮುದಾಯದ ಚರಿತ್ರೆಯಲ್ಲೇ ಒಂದು ಅವಿಸ್ಮರಣೀಯ ಘಟನೆಯಾಗಿ ದಾಖಲಾಯಿತು. ಶ್ರೀ ಗುರುಗಳು ಶಿವಲಿಂಗವಿರುವ ಗರ್ಭಗುಡಿಯೊಳಗೆ ಹೋಗಿ ಶಿವಲಿಂಗಕ್ಕೆ

ಪೂಜ್ಯ ಗುರುಗಳಿಂದ ಶಿವಲಿಂಗ ಪ್ರತಿಷ್ಠಾಪನೆ Read More »

ಬಿಲ್ಲವ ಸಮಾಜದ ಹೊಸ ಮನ್ವಂತರಕ್ಕೆ ನಾಂದಿ

ಮಂಗಳೂರು : ಅಸ್ಪೃಶ್ಯತೆ ತುತ್ತ ತುದಿಯಲ್ಲಿದ್ದ ಆ ದಿನಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹುಸಂಖ್ಯಾತರೆನಿಸಿಕೊಂಡ ಬಿಲ್ಲವರು ಮೇಲ್ವರ್ಗವರು ಎಂದೆನಿಸಿಕೊಂಡವರಿಂದ ನೋವು ಅವಮಾನಗಳನ್ನು ಅನುಭವಿಸಿ ರೋಸಿ ಹೋಗಿದ್ದರು… ಆ ಸಮುದಾಯದವರಿಂದ ಮಾರುದ್ದ ದೂರ ನಿಲ್ಲಬೇಕಾದ ಹೀನಾಯ ಸ್ಥಿತಿ… ದೇವಾಲಯ, ವಿದ್ಯಾ ಮಂದಿರಗಳಲ್ಲಿ ಪ್ರವೇಶವಿಲ್ಲದೆ ಅನುಭವಿಸುತ್ತಿದ್ದ ನರಕಯಾತನೆ… ನೋವಿನಿಂದ ಜರ್ಜರಿತರಾದ ಸಮಾಜದ ಹಿರಿಯರು ಶ್ರೀಮಾನ್ ಸಾಹುಕಾರ್ ಕೊರಗಪ್ಪನವರ ನೇತೃತ್ವದಲ್ಲಿ, ಆದಾಗಲೇ ಕೇರಳದಲ್ಲಿ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಯ ಜ್ಯೋತಿ ಬೆಳಗಿಸಿದ ಶ್ರೀ ನಾರಾಯಣಗುರುಗಳನ್ನು ಕೇರಳದಲ್ಲಿ ಭೇಟಿ ಮಾಡಿದರು. ಧಾರ್ಮಿಕವಾಗಿ, ಸಾಮಾಜಿಕವಾಗಿ ಬಿಲ್ಲವರು

ಬಿಲ್ಲವ ಸಮಾಜದ ಹೊಸ ಮನ್ವಂತರಕ್ಕೆ ನಾಂದಿ Read More »

ಜಯ ಸಿ. ಸುವರ್ಣರು ಶತಮಾನ ಕಂಡ ಮಹಾನ್ ಸಮಾಜಸೇವಕ

ಮಂಗಳೂರು: ಜಯ ಸಿ. ಸುವರ್ಣರು ನಿಧನರಾದ ಸುದ್ದಿ ತಿಳಿದಾಗ ಅವರು ಮಾಡುತಿದ್ದ ಸೇವಾಕೈಂಕರ್ಯ ಮುಂದುವರಿಸುವವರು ಯಾರು ಎಂದು ಕಳವಳಗೊಂಡಿದ್ದೆ. ಜಯ ಸುವರ್ಣರು ಶತಮಾನ ಕಂಡಮಹಾನ್ ಸಮಾಜಸೇವಕ. ಅವರ ಆದರ್ಶವನ್ನು ನಾವೆಲ್ಲರೂ ಮುಂದುವರಿಸುವುದೇ ಅವರಿಗೆ ಸಲ್ಲಿಸುವ ಗೌರವ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಗೌರವಾಧ್ಯಕ್ಷ, ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ, ಸಹಕಾರಿ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಮುಂದಾಳು ಜಯ ಸಿ. ಸುವರ್ಣರಿಗೆ ಅವರ ಹುಟ್ಟೂರು ನಂದಿಕೂರು ಬಳಿಯ

ಜಯ ಸಿ. ಸುವರ್ಣರು ಶತಮಾನ ಕಂಡ ಮಹಾನ್ ಸಮಾಜಸೇವಕ Read More »

ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಮಾನವೀಯ ನೆರವು

ಮಾನವತೆಯ ಹರಿಕಾರ, ಯುಗಪುರುಷ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ದಿವ್ಯ ಹಸ್ತದಿಂದಲೇ ಪ್ರತಿಷ್ಠಾಪನೆಗೊಂಡು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಸಹಾಯ, ಸಹಕಾರ ಬೆಂಬಲದೊಂದಿಗೆ ನವೀಕರಣಗೊಂಡು ವಿಶ್ವವಿಖ್ಯಾತಿ ಗಳಿಸಿದ ಶ್ರೀ ಗೋಕರ್ಣನಾಥ ಕ್ಷೇತ್ರ ಕರೋನಾ ಸಂದರ್ಭ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಅಪೂರ್ವ ಸೇವೆಗೆ ಸಾಕ್ಷಿಯಾಗಿದೆ. ಕ್ಷೇತ್ರದ ಈ ಅನುಕರಣೀಯ ನಡೆ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಬೆಂಬಲದೊಂದಿಗೆ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್‍ರವರ ಉಪಸ್ಥಿತಿಯಲ್ಲಿ ,

ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಮಾನವೀಯ ನೆರವು Read More »

ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಗೋಕರ್ಣನಾಥ ಸೇವಾದಳ

ಕಳೆದ ವಾರವಷ್ಟೇ ಕುದ್ರೋಳಿ ಕ್ಷೇತ್ರದ ‘ಮಂಗಳೂರು ದಸರಾ’ ಮಹೋತ್ಸವ ಮಾದರಿ ಉತ್ಸವವಾಗಿಸಲು ಪ್ರಮುಖ ಕಾರಣಕರ್ತರಾದ ಶ್ರೀ ಗೋಕರ್ಣನಾಥ ಸೇವಾದಳ ಸದಸ್ಯರು, ಕ್ಷೇತ್ರದ ಭಕ್ತರು, ಯುವಕರ ತಂಡದಿಂದ ಕ್ಷೇತ್ರದ ಪುಷ್ಕರಣಿ ಶುಚಿತ್ವ ಕಾರ್ಯ ಭಾನುವಾರ ಅಚ್ಚುಕಟ್ಟಾಗಿ ನೆರವೇರಿತು. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ, ಒಂದೇ ತಾಯಿಯ ಮಕ್ಕಳಂತೆ, ಪರಸ್ಪರ ಸಹೋದರತೆ ಸಾರುವ ರೀತಿಯಲ್ಲಿ ಬೆಳಗ್ಗೆ 9 ಗಂಟೆಗೆ ಶುಚಿತ್ವ ಕಾರ್ಯದಲ್ಲಿ ತೊಡಗಿಕೊಂಡ ಸದಸ್ಯರು ಮಧ್ಯಾಹ್ನ 12.30ರೊಳಗೆ ಪೂರ್ಣ ಸ್ವಚ್ಛತೆ ಮಾಡಿದರು… ಸುಮಾರು ಎರಡು ಲೋಡುಗಳಷ್ಟು

ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಗೋಕರ್ಣನಾಥ ಸೇವಾದಳ Read More »

ಮಂಗಳೂರು ದಸರಾ ಅಚ್ಚುಕಟ್ಟಾದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಶ್ಲಾಘನೆ

ಮಂಗಳೂರು: ಕರೊನಾ ಪರಿಸ್ಥಿತಿ ಮಧ್ಯೆ ಕಠಿಣ ನಿಯಮಗಳಿಂದಾಗಿ ಉತ್ಸವ, ಹಬ್ಬಗಳನ್ನು ನಡೆಸುವುದೇ ಸವಾಲು.‌ ಆದರೆ ಕುದ್ರೋಳಿ ಕ್ಷೇತ್ರದಲ್ಲಿ 10 ದಿವಸ ನಡೆದ ನವರಾತ್ರಿ ಉತ್ಸವ ಅಚ್ಚುಕಟ್ಟಾಗಿತ್ತು. ಸ್ವಯಂಸೇವಕರು ಶಿಸ್ತುಬದ್ಧವಾಗಿ ಜನರಿಗೆ ದೇವರ ದರುಶನ ಮತ್ತು ಅನ್ನ ಸಂತರ್ಪಣೆ, ಪಾರ್ಕಿಂಗ್ ಮುಂತಾದ ವ್ಯವಸ್ಥೆಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಇಡೀ ಕಾರ್ಯಕ್ರಮವೇ ಮಾದರಿಯಾಗಿಸಲು ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಶ್ಲಾಘಿಸಿದರು. ಕುಟುಂಬ ಸಮೇತರಾಗಿ‌ ಭಾನುವಾರ ಕುದ್ರೋಳಿ ಕ್ಷೇತ್ರದ ದರುಶನ ಪಡೆದ ನಂತರ ಕ್ಷೇತ್ರದ ಪುಷ್ಕರಣಿಯಲ್ಲಿ ನಡೆಯುತ್ತಿದ್ದ ಶುಚಿತ್ವ

ಮಂಗಳೂರು ದಸರಾ ಅಚ್ಚುಕಟ್ಟಾದ ವ್ಯವಸ್ಥೆಗೆ ಜಿಲ್ಲಾಧಿಕಾರಿ ಶ್ಲಾಘನೆ Read More »

You cannot copy content of this page

Scroll to Top