ಮಂಗಳೂರು ದಸರಾ ಮಹೋತ್ಸವ: 2020

ಶುಚಿತ್ವಕ್ಕೆ ಮಾದರಿಯಾದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅನ್ನಪ್ರಸಾದ ಸೇವೆ

ಮಂಗಳೂರು: ‘ನಮ್ಮ ದಸರಾ ನಮ್ಮ ಸುರಕ್ಷೆ’ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದಲ್ಲಿ ನಿತ್ಯ ಮಧ್ಯಾಹ್ನ ಜರುಗುವ ಅನ್ನಪ್ರಸಾದ ಸೇವೆ ಶುಚಿತ್ವಕ್ಕೆ ಮಾದರಿಯಾಯಿತು.

ಅನ್ನಪ್ರಸಾದವನ್ನು ಹಾಳೆಯ ತಟ್ಟೆಯ ಪ್ಯಾಕ್ ಮೂಲಕ ಭಕ್ತರಿಗೆ ವಿತರಿಸಲಾಗುತ್ತಿದೆ. ಶುಚಿ ರುಚಿಯಾದ ಅನ್ನಪ್ರಸಾದ, ಸಾಮಾಜಿಕ ಅಂತರ, ಸ್ವಯಂಸೇವಕರ ಪ್ರೀತಿಯ ಸ್ವಾಗತ, ಹೃದಯಸ್ಪರ್ಶಿ ಆತಿಥ್ಯ, ಕರೊನಾ ಕಟ್ಟುಪಾಡುಗಳ ನಡುವೆ ವ್ಯವಸ್ಥಿತವಾಗಿ ನಡೆಯುತ್ತಿರುವುದು ಕ್ಷೇತ್ರದ ಭಕ್ತಾದಿಗಳ ಪ್ರಶಂಸೆಗೆ ಪಾತ್ರವಾಯಿತು.

1 thought on “ಶುಚಿತ್ವಕ್ಕೆ ಮಾದರಿಯಾದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅನ್ನಪ್ರಸಾದ ಸೇವೆ”

  1. ಅಶೋಕ್ ಕುಮಾರ್ ಪಡ್ಪು

    ನಮ್ಮ ದಸರಾ ನಮ್ಮ ಸುರಕ್ಷೆ ಅಕ್ಷರಶಃ ಪಾಲನೆಯಾಗುತ್ತಿದೆ..

Leave a Comment

Your email address will not be published. Required fields are marked *

You cannot copy content of this page

Scroll to Top