ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು

ನಮ್ಮ ದಸರಾ ನಮ್ಮ ಸುರಕ್ಷೆ

ನಮ್ಮ ಸುರಕ್ಷತೆ ನಾವೇ ಪಾಲಿಸೋಣ!

ಎಲ್ಲರಿಗೂ ತಿಳಿದಂತೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಈ ಬಾರಿ ಮಂಗಳೂರು ದಸರಾ ಮಹೋತ್ಸವ ಕೋವಿಡ್ ಆರೋಗ್ಯ ವಿಷಮ ಸ್ಥಿತಿಯ ಹಿನ್ನೆಲೆ ದೇವಸ್ಥಾನದ ವಿಧಿ ವಿಧಾನಗಳ ಸಂಪ್ರದಾಯಂತೆ ಮಾತ್ರ ನಡೆಯಲಿದೆ.

  1. ನಮ್ಮ ದಸರಾ- ನಮ್ಮ ಸುರಕ್ಷೆ* ಘೋಷವಾಕ್ಯದೊಂದಿಗೆ ನಡೆಯುವ ಉತ್ಸವವಾಗಿರುವುದರಿಂದ ಕ್ಷೇತ್ರದ ಭಕ್ತಾಧಿಗಳು ಈ ಕೆಳಗಿನ ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗೋಣ.
  2. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 6 ವರ್ಷದ ಒಳಗಿನ ಮಕ್ಕಳನ್ನು 10 ದಿನದ ಉತ್ಸವಕ್ಕೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  3. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು.. ಮಾಸ್ಕ್ ಇಲ್ಲದವರಿಗೆ ಪ್ರವೇಶ ಕಡ್ಡಾಯ ನಿಷೇಧ.
  4. ದೇವಸ್ಥಾನ ಪ್ರವೇಶ ಮೊದಲು ಥರ್ಮಲ್ ಸ್ಕ್ಯಾನ್ ಮಾಡಲಾಗುವುದು. ಜ್ವರ, ಶೀತ ಇದ್ದವರು ದೇವಳ ಪ್ರವೇಶ ನಿಷೇಧಿಸಲಾಗಿದೆ. ಒಂದು ವೇಳೆ ಥರ್ಮಲ್ ಸ್ಕ್ಯಾನ್ ವೇಳೆ ಟೆಂಪರೇಚರ್ ಹೆಚ್ಚು ಇದ್ದರೆ ಅವರಿಗೆ ದೇವಳ ಪ್ರವೇಶಕ್ಕೆ ಅನುಮತಿ ಇಲ್ಲ.
  5. ದೇವರ ದರ್ಶನವನ್ನು ಅಂತರ ಕಾಯ್ದುಕೊಂಡೇ ಮಾಡತಕ್ಕದ್ದು.
  6. ಗುಂಪು ಸೇರಿಕೊಂಡು ಬರುವುದು ಬೇಡ. ನಮ್ಮೊಳಗೆ ಇರಲಿ ಸಾಮಾಜಿಕ ಅಂತರ.
  7. ದೇವಸ್ಥಾನದ ಆವರಣ ಸೇರಿದಂತೆ ನವದುರ್ಗೆಯರ ಪ್ರತಿಷ್ಠಾಪನೆ ಜಾಗದಲ್ಲಿ ಮೊಬೈಲ್‌ನಲ್ಲಿ ಸೆಲ್ಫಿ ಅಥವಾ ಫೋಟೋ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  8. ಹಿರಿಯರನ್ನು ಗೌರವಿಸುವ ಸಂಪ್ರದಾಯ ನಮ್ಮದು. ಆದ್ದರಿಂದ ಉತ್ಸವಕ್ಕೆ ಆಗಮಿಸುವ ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಅಡೆ ತಡೆ ಆಗದಂತೆ ಅವರಿಗೆ ಮೊದಲ ಪ್ರಾಶಸ್ತ್ಯ ನೀಡೋಣ.
  9. ಪಾರ್ಕಿಂಗ್ ಸ್ಥಳವಾಗಲಿ, ಸಂತೆ, ಅಂಗಡಿ ಪ್ರದೇಶಗಳಲ್ಲಿ ಗುಂಪು ಸೇರದೆ ಸಾವಕಾಶವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ದಸರಾ ನಮ್ಮ ಸುರಕ್ಷೆ ಯನ್ನು ಯಶಸ್ವಿಗೊಳಿಸೋಣ.
  10. ಉತ್ಸವಕ್ಕೆ ಬರುವ ಭಕ್ತಾಧಿಗಳು ಮೂರ್ತಿಗಳನ್ನು ಸ್ಪರ್ಶ ಮಾಡದೆ ಸಹಕರಿಸಬೇಕು.
  11. 60 ವರ್ಷದ ಮೇಲ್ಪಟ್ಟವರು, ಅನಾರೋಗ್ಯ ಪೀಡಿತರು ಈ ವರ್ಷದ ಮಟ್ಟಿಗೆ ಮನೆಯಲ್ಲೇ ಕುಳಿತು ದೇವರ ದರ್ಶನ ಪಡೆದುಕೊಳ್ಳಬೇಕು. ದರ್ಶನ ವ್ಯವಸ್ಥೆಯನ್ನು ಟಿ.ವಿ, ಆನ್‌ಲೈನ್ ಮೂಲಕ ಮಾಡಲಾಗುವುದು. ಜತೆಗೆ ಇವರ ಪರವಾಗಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗುವುದು.
  12. ಪ್ರಸಾದ ವಿತರಣೆಗೆ ದೇವಳದ ಗ್ಲಾಸ್ ಹೌಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.
  13. ಮಧ್ಯಾಹ್ನದ ಮಹಾಪೂಜೆ ಬಳಿಕ 2.30ರ ತನಕ ದೇವಸ್ಥಾನದ ಹೊರಹೋಗುವ ಗೇಟಿನಲ್ಲಿ ಹಾಳೆಯ ಬೌಲ್‌ನಲ್ಲಿ ಅನ್ನಪ್ರಸಾದ ವಿತರಿಸಲಾಗುವುದು. ಆದರೆ ಯಾರೂ ಕೂಡ ತಟ್ಟೆಯನ್ನು ಸಿಕ್ಕಸಿಕ್ಕಲ್ಲಿ ಬಿಸಾಡದೇ ಡಸ್ಟ್‌ಬಿನ್‌ಗೆ ಹಾಕಬೇಕು.
  14. ದೇವಳ ಸುತ್ತಮುತ್ತ ಯಾವುದೇ ರೀತಿಯ ಗಲೀಜಿಗೆ ಅವಕಾಶ ನೀಡದೆ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು.
  15. ಸ್ವಯಂ ಸೇವಕರು ನೀಡುವ ಪ್ರತಿಯೊಂದು ಮಾರ್ಗದರ್ಶನವನ್ನು ನಮ್ಮ ಸುರಕ್ಷೆಯ ದೃಷ್ಟಿಯಿಂದ ಪ್ರೀತಿಯಿಂದ ಪಾಲಿಸೋಣ.
  16. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ಮಾಡಲಾಗುತ್ತಿದ್ದು, ಮನೆಯಲ್ಲೇ ಕುಳಿತು ಆಸ್ವಾಧಿಸಬಹುದು.

ಹೆಚ್ಚಿನ ಮಾಹಿತಿಗೆ: ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ( 94482 83999) ಅಥವಾ ದೇವಳ ಕಚೇರಿ (0824-2983040)ಯನ್ನು ಸಂಪರ್ಕಿಸಬಹುದು.

Leave a Comment

Your email address will not be published. Required fields are marked *

You cannot copy content of this page

Scroll to Top