ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ವತಿಯಿಂದ ಶ್ರೀಕ್ಷೇತ್ರ ಕುದ್ರೋಳಿ ನವರಾತ್ರಿ ಮಹೋತ್ಸವ ಪ್ರಯುಕ್ತ ಅನ್ನದಾನ ಸೇವೆಗೆ ಊರ ಪರವೂರ ಭಕ್ತರ ಸಹಕಾರದಿಂದ ಒಂದುವರೆ ಲಕ್ಷ ರೂಪಾಯಿ ನೀಡಲಾಯಿತು. ಕ್ಷೇತ್ರಾಡಳಿತ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್., ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿ ರವಿಶಂಕರ್ ಮಿಜಾರ್, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದ ದಿನೇಶ್ ಸುವರ್ಣ ರಾಯಿ, ರಕ್ಷಿತ್ ಬಿರ್ವ, ಕುಸುಮಾಕರ್ ಕುಂಪಲ,ವಿಜಯ್ ಅಮ್ಟಾಡಿ, ನಳಿನಿ ಬಿಸಿರೋಡ್, ರವಿ ಕೊಂಡಾಣ, ಪ್ರವೀಣ್ ಕಿರೋಡಿ, ಸಂತೋಷ್,ನಾಗೇಶ್ ನೈಬೇಲು, ಮತ್ತಿತರು ಉಪಸ್ಥಿತರಿದ್ದರು.
ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದಿಂದ ಅನ್ನದಾನ ಸೇವೆ
