ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಎಂಟನೆಯ ದಿನ (24.10.2020) ಮಹಾಗೌರಿ ಆರಾಧನೆ. ನವರಾತ್ರಿ ಎಂಟನೇ ದಿನದ ಪೂಜೆಯು ಮಹಾ ಅಷ್ಟಮಿ ತಿಥಿ (ಚಂದ್ರ ಕರಗುವ ಎಂಟನೇ ದಿನ)ದಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 24ರಂದು ಶನಿವಾರ ಈ ದಿನವನ್ನು ಆಚರಿಸಲಾಗುತ್ತಿದೆ.
ದೇವಿ ಮಹಾಗೌರಿಯ ಪೂಜೆ (ನವರಾತ್ರಿ 8ನೇ ದಿನ)
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುವರು. ಆಕೆಯು ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಲಿರುವುದು ಮತ್ತು ಇದು ಭಕ್ತರಿಗೆ ವರವನ್ನು ನೀಡುವಂತಿದೆ.

ತಾಯಿ ಮಹಾಗೌರಿಯ ಕಥೆ
ಒಂದು ಸಲ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆಯುವರು ಮತ್ತು ಮರಳಿ ದೇವಲೋಕಕ್ಕೆ ಹೋಗಲು ಅವರು ಶಿವನನ್ನು ಮದುವೆಯಾಗಲು ಬಯಸುವರು. ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುವರು. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆಯು ತುಂಬಿರುವುದು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿರುವುದು ಮತ್ತು ಆಕೆಯು ಸಾವಿರಾರು ವರ್ಷಗಳ ಹೀಗೆ ಇರುವರು. ಶಿವ ದೇವರು ಆಕೆಯ ತಪಸ್ಸಿನಿಂದ ಪ್ರಭಾವಿತರಾಗಿ, ಆಕೆಯ ದೇವನ್ನು ಹೊಳೆಯುವಂತೆ ಮಾಡಲು ಗಂಗಾ ದೇವಿಯನ್ನು ಬಿಡುವರು. ಇದರಿಂದಾಗಿ ಮಹಾಗೌರಿಯ ಅವತಾರವು ತುಂಬಾ ಕಾಂತಿಯುತ, ಬಿಳಿ ಹಾಗೂ ಧಾನ್ಯಸಕ್ತದಲ್ಲಿರುವುದು.

ಮಹಾಗೌರಿ ತಾಯಿಯ ಪೂಜೆಯ ಮಹತ್ವ
ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವರು. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ನೆರವಾಗುವರು.

ನವರಾತ್ರಿ ಎಂಟನೇ ದಿನ ಮಹಾಗೌರಿ ಪೂಜೆ
ಮಹಾಗೌರಿ ದೇವಿಯ ಪೂಜೆ ಮಾಡಲು ರಾತ್ರಿ ಅರಳುವಂತಹ ಮಲ್ಲಿಗೆ ಹೂವನ್ನು ಬಳಸಬೇಕು. ಭಕ್ತಿ ಹಾಗೂ ಶ್ರದ್ಧೆಯಿಂದ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆ ಮಾಡಬೇಕು. ಗಣೇಶ ಪ್ರಾರ್ಥನೆ ಮೂಲಕ ಪೂಜೆ ಆರಂಭಿಸಿ, ಷೋಡಶೋಪಚಾರ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು.
ಮಹಾಗೌರಿ ತಾಯಿಯ ಮಂತ್ರ
ಓಂ ದೇವಿ ಮಹಾಗೌರೈ ನಮಃ
ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ
ಮಹಾಗೌರಿ ಪ್ರಾರ್ಥನೆ
ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ
ಮಹಾಗೌರಿ ಸ್ತುತಿ
ಯಾ ದೇವಿ ಸರ್ವಭೂತೇಶು ಮಾ ಮಹಾಗೌರಿ ರೂಪೇಣ ಸಂಹಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಮಹಾಗೌರಿ ತಾಯಿಯ ಧ್ಯಾನ
ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ
ಸಿಮರೂಢ ಚತುರ್ಭುಜಾ ಮಹಾಗೌರಿ ಯಶಾಸ್ವಿನಿಮ್
ಪುರ್ನಂದ್ ನಿಭಾಮ್ ಗೌರಿ ಸೋಮಾಚಕ್ರಸ್ಥಿತಂ ಅಷ್ಟಾಮ ಮಹಾಗೌರಿ ತ್ರಿನೇತಂ
ವರಭೀತಿಕಾರಾಮ್ ತ್ರಿಶುಲಾ ದಮಾರುಧರಂ ಮಹಾಗೌರಿ ಭಜೆಮ್
ಪತಂಬರಾ ಪರಿಧನಂ ಮೃದುಹಾಸ್ಯ ನಾನಾಲಂಕರಾ ಭೂಷಿತಂ
ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಮ್
ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ತ್ರಿಲೋಕ್ಯ ಮೋಹನಂ
ಕಾಮನಿಯಮ್ ಲಾವಣಮ್ ಮೃಣಾಳಂ ಚಂದನ ಗಂಧಲೇಪಿತಂ
ಮಹಾಗೌರಿ ಸ್ತೋತ್ರ
ಸರ್ವಾಸಂಕಟ ಹಂತ್ರಿ ತುವಂಹಿ ಧಾನ ಐಶ್ವರ್ಯ ಪ್ರದಾಯನಮ್
ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ
ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್
ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಾಣಮಾಮಯಂ
ತ್ರಿಲೋಕ್ಯಮಂಗಲ ತ್ವಮಹಿ ತಾಪತ್ರಯ ಹರಿನಿಮ್
ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಾಣಮಾಮಯಂ
ಪೂಜೆಯ ಮಹತ್ವ
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ಪೂಜೆಯನ್ನು ಮಾಡುವುದರಿಂದ ಭಕ್ತರಿಗೆ ಶಕ್ತಿ ಮತ್ತು ಯೋಗ್ಯತೆ ಸಿಗುವುದು. ಎಲ್ಲಾ ಸಂಕಷ್ಟಗಳನ್ನು ಆಕೆ ನಿವಾರಣೆ ಮಾಡುವಳು. ಭಕ್ತರ ಚಿಂತೆ ದೂರ ಮಾಡಿ, ಸದ್ಗುಣ ನೀಡುವರು. ಸುಖ ಜೀವನ ಸಾಗಿಸಲು ಭಕ್ತರಿಗೆ ಜೀವನದಲ್ಲಿ ಬೇಕಾಗಿರುವ ಎಲ್ಲವನ್ನು ಆಕೆ ಕರುಣಿಸವಳು.
ಮಹಾಗೌರಿ ತಾಯಿಯನ್ನು ಪರಿಪೂರ್ಣತೆಯ ಅಧಿಕಾರಿಣಿ. ಭಕ್ತರ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವ ಆಕೆ ಎಲ್ಲಾ ರೀತಿಯ ಸುಖ ಹಾಗೂ ಸಂತೋಷವನ್ನು ಕರುಣಿಸುವಳು. ನವರಾತ್ರಿಯ ಎಂಟನೇ ದಿನದ ಪೂಜೆಯು ಸರಸ್ವತಿ ಪೂಜೆಯ ಎರಡನೇ ದಿನವಾಗಿದೆ. ಇದನ್ನು ಮಹಾ ಅಷ್ಟಮಿ ಎಂದು ಕರೆಯಲಾಗುತ್ತದೆ.